ಅನಾದಿ

ಯಾವುದು ಮೊದಲೊ,
ಮೊದಲಿಗ ರಾರೋ,
ಭಾವವಿಸಂಗತ,
ಅಲೇಖ್ಯ ನಂದನಕೆ,

ಕೊನೆ ಎಲ್ಲಿಯದೊ,
ಕೊನೆಯಿಸುವವರಾರೋ,
ಭೂರಮೆ ಭಾಗ್ಯದ,
ಬಾಂದಳದಂಗಳಕೆ,

ಅಂಕುರವಾವುದೋ
ಅಂದಣದ್ಹೇರಿಗೆ?
ಅಂಕುಶವೆಲ್ಲಿಯೊ
ಮುಂದಣ ಯಾನೆಗೆ?

ನಿಃ ಶಬ್ದದಿ ದನಿಸಿದ
ಇನಿದನಿಯಾವುದೊ,
ಯುಗ-ಯುಗಾಂತರ
ಜಾಲ-ಜಾಲದಲಿ,

ಶಬ್ದ-ಶಬ್ದಾಬ್ದಿಯ
ಶಾಬ್ದಿಕದಕ್ಕರ,
ಜಗ-ಜಗ ಜಾತರ
ಲೀಲಾ ಮಾಲೆಯಲಿ,

ಪಲ್ಲವ-ಪಲ್ಲವಿ
ಚರಣದ ಚಾರಣ,
ವಲ್ಲರಿ ಗಾನ ಗಾಯನ
ಸರ ಸ್ವರ ರಿಂಗಣ,

ಪ್ರಕೃತಿ ಪುರುಷನೊ
ಪುರುಷ-ಪ್ರಕೃತಿಯೋ,
ಪರುಷದಂಟಿನ ನಂಟಿನ
ಭಾಗ್ಯೋದಯಕೆ,

ಏಕದೊಳನೇಕವೋ,
ಅನೇಕದೊಳೇಕವೊ,
ಏಕೀ ಭವಿಸಲೋಲೈಸುವ,
ಏಕಾಂಕ ಜೀವನದಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಯೋತ್ಪಾದನೆ
Next post ಮನೆ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys